ಎಂಥದೆ ಇರಲಿ

ಎಂಥದೆ ಇರಲಿ ಯಾವ ಮದ್ದಿಗೂ
ಬಗ್ಗದ ರೋಗವಿದು
ಯಾರೇ ಇರಲಿ ಎಂಥ ವೈದ್ಯಗೂ
ಸಗ್ಗದ ರೋಗವಿದು

ಹೊರಗಿನ ಔಷಧ ಹಾಯಲಾರದ
ಮನಸಿನ ಜಾಡು ಇದು
ಯಾವ ಪಂಡಿತಗು ಆಳೆಯಲು ಬಾರದ
ಕನಸಿನ ಕೇಡು ಇದು,
ರೋಗಿಗೆ ಮಾತ್ರ ಗೊತ್ತಿರುವಂಥ
ಭಾವದ ಬೇನೆ ಇದು
ರೋಗಿಗೆ ಮಾತ್ರವೆ ಹೇಳಲು ಬರುವ
ಮದ್ದಿಗೆ ಮಾಯುವುದು

ನಲ್ಲೆಯ ನೋವಿಗೆ ನಲ್ಲನೆ ವೈದ್ಯ
ಬೇರೆ ಯಾವ ಮದ್ದು?
ನನ್ನ ನೋವಿಗೆ ಕ್ಳಷ್ಣನೆ ವ್ಶೆದ್ಯ
ನನ್ನೆದೆಯನು ಕದ್ದು
ಎಲ್ಲೊ ಹೋಗಿರುವ ತನ್ನಿರಿ ಅವನ
ಮಾಯುವುದೀ ಗಾಯ,
ಬಂದನೊ ಗಿರಿಧರ ಎದುರಿಗೆ – ಕೂಡಲೆ
ಎಲ್ಲ ರೋಗ ಮಾಯ!

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೪೦
Next post ಗನ್ ಪ್ಪೂಷ್ ಶಟ್೯!

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys